
5th May 2025
ಜಿ ಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ ಪಟ್ಟಣದ ಆರಾಧ್ಯ ದೇವರಾದ ಶ್ರೀ ಅಡವಿ ಮುಖ್ಯ ಪ್ರಾಣೇಶ ದೇವರ ಜಾತ್ರಾ ಮಹೋತ್ಸವವು ನಾಳೆ ದಿನಾಂಕ 06-05-2025 ರಿಂದ 14-05=2025 ರ ವರೆಗೆ ಜರುಗಲಿದ್ದು ರಥೋತ್ಸವವು ವೈಶಾಖ ಶುದ್ಧ ಪೂರ್ಣಿಮಾ ದಿನಾಂಕ 12-05-2025 ರಂದು ವಿಜೃಂಭಣೆಯಿಂದ ನಡೆಯಲಿದೆ.
--------ಜಾತ್ರಾ ಕಾರ್ಯಕ್ರಮಗಳ ವಿವರ-------
ದಿನಾಂಕ : 06:05:2025 ಮಂಗಳವಾರ ವೈಶಾಖ
ಶು॥ ನವಮಿ ಬೆಳಗ್ಗೆ 8:00 ಗಂಟೆಗೆ ಶ್ರೀ ಅಡವಿ
ಮುಖ್ಯಪ್ರಾಣೇಶನ ಉತ್ಸವ ಮೂರ್ತಿಯನ್ನು ಅರ್ಚಕರ
ಮನೆಯಿಂದ ದೇವಸ್ಥಾನದವರೆಗೆ ಭಜನೆ ಹಾಗೂ
ಮೆರವಣಗೆಯೊಂದಿಗೆ ಕರೆದುಕೊಂಡು ಬರುವುದು.
ನಂತರ ಶ್ರೀ ಬೃಹತಿ ಸಹಸ್ರಯಾಗದ ಕಲಶ ಪ್ರತಿಷ್ಠಾಪನೆ, ತದಂಗ, ಮದ್ಯಾಹ್ನ 12:00 ಕ್ಕೆ ವಿಧಿವತ್ತಾಗಿ ವೇದಮಂತ್ರ ಪಠಣದೊಂದಿಗೆ ಕಂಕಣ ಬಂಧನ ಹಾಗೂ ಗರುಡ ಪಟ ನಂತರ ನೈವೇದ್ಯ ತೀರ್ಥ ಪ್ರಸಾದ. ಸಂಜೆ 07-30 ಕ್ಕೆ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಸ್ವಸ್ತಿವಾಚನ ಮಹಾಮಂಗಳಾರುತಿ.
ದಿನಾಂಕ 07-05-2025 ಬುಧವಾರ ವೈಶಾಖ
ಶು॥ ದಶಮಿಯಿಂದ ಬೆಳಗ್ಗೆ 7:30 ರಿಂದ 9:00 ರ
ವರೆಗೆ ವಾಯುಸ್ತುತಿ ಪುರಶ್ಚರಣ ಮಧು ಅಭಿಷೇಕ,
ಪಂಚಾಮೃತ, ವೇದಪಠಣ ಪಲ್ಲಕ್ಕಿ ಉತ್ಸವದೊಂದಿಗೆ
ಬಲಿಹರಣ ಬೆಳಗ್ಗೆ: 09:00 ರಿಂದ ಶ್ರೀ ಬೃಹತಿ
ಸಹಸ್ರಯಾಗ ಮಧ್ಯಾಹ್ನ : 12-00 ಗಂಟೆಗೆ
ಪೂರ್ಣಾಹುತಿ, 12:30 ಗಂಟೆಗೆ ನೈವೇದ್ಯ, ತೀರ್ಥ
ಪ್ರಸಾದ ರಾತ್ರಿ 7:00 ಗಂಟೆಗೆ ಬಲಿಹರಣ ಪಲ್ಲಕ್ಕಿ,
ಮಹಾಮಂಗಳಾರತಿ ಹಾಗೂ ತೊಟ್ಟಿಲು ಸೇವೆ, 07:30 ರಿಂದ 09 ರವರೆಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ-ತದಂಗ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ವೆಂಕಟೇಶ ಸ್ತವರಾಜ ಹಾಗೂ ಲಕ್ಷ್ಮೀಶೋಭಾನ ಪಾರಾಯಣ.
ದಿನಾಂಕ: 08-05-2025 ಗುರುವಾರ ವೈಶಾಖ
ಶು II ಏಕಾದಶಿ ಬೆಳಗ್ಗೆ 8:30 ಗಂಟೆಗೆ ಪಲ್ಲಕ್ಕಿ ಉತ್ಸವ
ಪ್ರಾಕಾರ ಪ್ರದಕ್ಷಿಣೆ, ರಾತ್ರಿ 8:30 ಗಂಟೆಗೆ ಪಲ್ಲಕ್ಕಿ ಉತ್ಸವ, ಹರಿವಾಣ ಸೇವಾ ಹಾಗೂ ಪತ್ತಾ ಸೇವೆ.
ದಿನಾಂಕ : 09-05-2025 ಶುಕ್ರವಾರ ವೈಶಾಖ ಶು॥
ದ್ವಾದಶಿ ಬೆಳಗ್ಗೆ 5:00 ಕ್ಕೆ ವೇದಪಠಣ ಪಲ್ಲಕ್ಕಿ
ಉತ್ಸವದೊಂದಿಗೆ ಬಲಿಹರಣ, 06:00 ಕ್ಕೆ ನೈವೇದ್ಯ ತೀರ್ಥಪ್ರಸಾದ, ರಾತ್ರಿ 7:30 ಗಂಟೆಗೆ ಬಲಿಹರಣ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ.
ದಿನಾಂಕ :10-05-2025 ಶನಿವಾರ ವೈಶಾಖ
ಶು II ತ್ರಯೋದಶಿ “ಶ್ರೀ ನರಸಿಂಹ ಜಯಂತಿ” ಬೆಳಗ್ಗೆ
7:00 ರಿಂದ ಪಂಚಾಮೃತ ಸೇವೆ, 08:00 ಕ್ಕೆ ಪಲ್ಲಕ್ಕಿ
ಉತ್ಸವ, ಬಲಿಹರಣ 9-00 ಗಂಟೆಗೆ ಮನ್ಯುಸೂಕ್ತ ಹಾಗೂ ವಾಯುಸ್ತುತಿ ಪುರಶ್ಚರಣ ಹೋಮ, ಮಧ್ಯಾಹ್ನ 12:30 ಗಂಟೆಗೆ
ನೈವೇದ್ಯ ತೀರ್ಥ ಪ್ರಸಾದ ರಾತ್ರಿ 7:30 ರಿಂದ ಬಲಿಹರಣ, ಪಲ್ಲಕ್ಕಿ ಸೇವಾ, ಮಹಾಮಂಗಳಾರತಿ ಹಾಗೂ ತೊಟ್ಟಿಲು ಸೇವೆ, ನಂತರ ಲೋಕಕಲ್ಯಾಣಾರ್ಥವಾಗಿ ಶ್ರೀ ದುರ್ಗಾದೀಪ ನಮಸ್ಕಾರ ಪೂಜೆ ತದಂಗ ಸಾಮೂಹಿಕ ದುರ್ಗಾ ಸುಳಾದಿ ಹಾಗೂ ನರಸಿಂಹ ಸುಳಾದಿ ಪಾರಾಯಣ.
ದಿನಾಂಕ: 11-05-2025 ಭಾನುವಾರ ವೈಶಾಖ
ಶು॥ ಚರ್ತುದಶಿ ಬೆಳೆಗ್ಗೆ 7: 00 ಕ್ಕೆ ಮಧು ಅಭಿಷೇಕ,
ಪಂಚಾಮೃತ ಸೇವೆ, 08:00 ಕ್ಕೆ ಪಲ್ಲಕ್ಕಿ ಉತ್ಸವ,
ಬಲಿಹರಣ 9:00 ರಿಂದ ಭೂವರಾಹ ಮಂತ್ರ ಹಾಗೂ
ಪರ್ಜನ್ಯ ಸೂಕ್ತ ಹೋಮ, ಮಧ್ಯಾನ್ಹ 12:30ಕ್ಕೆ ನೈವೇದ್ಯ, ತೀರ್ಥ ಪ್ರಸಾದ ರಾತ್ರಿ 8:30 ರಿಂದ ದಂಡ ಬಲಿ, ರಥೋತ್ಸವ, ಹರಿವಾಣ ಸೇವೆ, ಪತ್ತಾಸೇವೆ, ಮಹ ಮಂಗಳಾರತಿ ಹಾಗೂ ತೊಟ್ಟಿಲು ಸೇವೆ.
ದಿನಾಂಕ: 12-05-2025 ಸೋಮವಾರ ವೈಶಾಖ
ಶು॥ ಪೌರ್ಣಿಮ ಬೆಳೆಗ್ಗೆ: 07-00 ಕ್ಕೆ ಮಧು ಅಭಿಷೇಕ,
ಪಂಚಾಮೃತ ಅಭಿಷೇಕ, ಶ್ರೀ ವ್ಯಾಸಪೂಜಾ,
10-00 ರಿಂದ ರಥಾಂಗ ಹಾಗೂ ಪವಮಾನ ಹೋಮ,
ಸತ್ಯನಾರಾಯಣ ಪೂಜಾ ಸಾಯಂಕಾಲ
6-00 ಗಂ ಗೆ “ಮಹಾ ರಥೋತ್ಸವ” ನಂತರ
ಹರಿವಾಣ ಸೇವೆ , ಪತ್ತಾಸೇವೆ, ನೈವೇದ್ಯ ತೀರ್ಥ ಪ್ರಸಾದ.
ದಿನಾಂಕ: 13-05-2025 ಮಂಗಳವಾರ ವೈಶಾಖ
ಬ!! ಪ್ರತಿಪದ ಬೆಳೆಗ್ಗೆ: 7-00 ಕ್ಕೆ ಮಧು ಅಭಿಷೇಕ,
ಪಂಚಾಮೃತ ಅಭಿಷೇಕ, ಯಜುರ್ವೇದ ಸಂಹಿತಾ
ಯಾಗದ ಕಲಶ ಪ್ರತಿಷ್ಠಾಪನೆ, ಸಂಜೆ 6-00 ಕ್ಕೆ (ಕೊಂಡ)
ಅವಭ್ರತಸ್ನಾನ, ಹರಿವಾಣ ಸೇವೆ, ಪತ್ತಾಸೇವೆ, ನೈವೇದ್ಯ ನಂತರ ಕಂಕಣ ಹಾಗೂ
ಗರುಡ ಪಟ ವಿಸರ್ಜನೆ, ತೀರ್ಥ ಪ್ರಸಾದ.
ದಿನಾಂಕ: 14-05-2025 ಬುಧವಾರ ವೈಶಾಖ
ಬII ದ್ವಿತಿಯ ಬೆಳೆಗ್ಗೆ: 7-00 ಕ್ಕೆ ಪಂಚಾಮೃತ ಅಭಿಷೇಕ, ನಂತರ ಯಜುರ್ವೇದ ಸಂಹಿತಾ ಯಾಗ,
ಮಧ್ಯಾಹ್ನ 12-30ಕ್ಕೆ ನೈವೇಧ್ಯ ತೀರ್ಥ ಪ್ರಸಾದ, ಸಂಜೆ 6-00 ಗಂಟೆಗೆ ದೇವಸ್ಥಾನದಿಂದ ಅರ್ಚಕರ ಮನೆಯವರೆಗೆ ಮೆರವಣಿಗೆಯೊಂದಿಗೆ ಉತ್ಸವ ಮೂರ್ತಿಯನ್ನು ಪುರ ಪ್ರವೇಶ.
........ ವಿಶೇಷ ಕಾರ್ಯಕ್ರಮ---------
ದಿನಾಂಕ 09:05:2025 ಶುಕ್ರವಾರ ದಂದು ರಾತ್ರಿ 7:00 ರಿಂದ 09:00 ಗಂಟೆಯವರೆಗೆ ನಾಡಿನ ಪ್ರಖ್ಯಾತ ಗಾಯಕರಾದ ಶ್ರೀ ಡಾ|| ಪಂ. ರಮೇಶ ಕುಲಕರ್ಣಿ ಕಲಬುರಗಿ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ “ದಾಸವಾಣಿ” ಕಾರ್ಯಕ್ರಮ ಇರಲಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ಅಡವಿರಾಯನ ಕೃಪೆಗೆ ಪಾತರಾಗಬೇಕೆಂದು ಶ್ರೀ ಅಡವಿ ಮುಖ್ಯ ಪ್ರಾಣೇಶ ದೇವಸ್ಥಾನ ವಿಶ್ವಸ್ಥ
ಸಮಿತಿಯ ಅಧ್ಯಕ್ಷರಾದ ತಿಮ್ಮಪ್ಪಯ್ಯ ದೇಸಾಯಿ ಕಾಟಪುರ ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಕುಷ್ಟಗಿ ಪಟ್ಟಣದ ಆರಾಧ್ಯ ದೇವರಾದ ಶ್ರೀ ಅಡವಿ ಮುಖ್ಯ ಪ್ರಾಣೇಶ ದೇವರ ಜಾತ್ರಾ ಮಹೋತ್ಸವವು ನಾಳೆ ದಿನಾಂಕ 06-05-2025 ರಿಂದ 14-05=2025 ರ ವರೆಗೆ ಜರುಗಲಿದ್ದು ರಥೋತ್ಸವವು ವೈಶಾಖ ಶುದ್ಧ ಪೂರ್ಣಿಮಾ ದಿನಾಂಕ 12-05-2025 ರಂದು ವಿಜೃಂಭಣೆಯಿಂದ ನಡೆಯಲಿದೆ.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ ಬಿ ಪುಟ್ಟಸ್ವಾಮಿ ಅಭಿಮಾನಿ ಬಳಗ ಸೇವಾ ಟ್ರಸ್ಟ್ ನ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.